Tuesday, June 3, 2008

ಅದು ನಿನ್ನ ಜೋತೇನೆ ಬಾಳ್ತಿನಿ....


ನಾನು ನಿನ್ನ ಬಾಳ್ ಹಚ್ಕೊಂಡಿದ್ಯ. ಆದ್ರ ನೀನು ಈ ರೀತಿ ಮಾಡ್ತಿ ಅಂಥ ಅಂದ್ಕೊಂಡಿರಲಿಲ್ಲ. ನೀನು ನನಗ ಮೋಸ ಮಾಡ್ಲಿಲ್ಲ. ಕೊನೆ ಗಳಿಗೆಯಲ್ಲಿ ಪ್ರಿತಿನು ಮಾಡಲಿಲ್ಲ.



ನೀನು ಮಾಡಿರೋ ಸಹಾಯಕ್ಕೆ ನಾನು ಏನಂತ ವರ್ಣಿಸಲಿ, ಹೆಗಂಥ ಕೃತಜ್ಞತೆ ಸಲ್ಲಿಸಲಿ, ಯಾವ ರೀತಿ ಋಣ ತಿರಿಸ್ಲಿ ಅನ್ನದ ನನಗ ತಿಳಿದಂಗ ಆಗೈತಿ.



ನನಗ ತಂದೆ ತಾಯಿ ಇಲ್ಲ ಅಂಥ ಹೇಳ್ದಾಗ ನಿನ್ನ ಮನಸ್ಸಿಗೂ ನೋವಾತು ಅಂಥ ಹೇಳಿದಿ. ಕಾಲೇಜಿಗೆ ಸೇರಾಕ ರೊಕ್ಕ ಇಲ್ಲ ಅಂದಾಗ ನೀನ ಅದನ್ನ ಕೊಟ್ಟಿ. ಅಷ್ಟೆ ಅಲ್ಲ, ಹಾಸ್ಟೆಲಿಗೆ ಸೇರಾಕನೂ ನೀನೆ ಹಣ ತುಂಬಿದಿ.



ಅವಾಗವಾಗ ನನ್ನ ಖರ್ಚಿಗೂ ಹಣ ಕೊಡ್ತಿದ್ದಿ. ನಾನು ನಿನಗೆನಾಗಬೇಕು, ಸಂಬಂಧಿನಾ, ಬಂದುವಾ ಅಥವಾ ನನ್ನ ಬಾಳನ್ನು ಹಂಚಿಕೊಳ್ಳುವವನಾ ಏನು? ಇದ್ಯಾವುದು ಅಲ್ಲ. ಆದರೆ ನನ್ನ ಮೇಲೆ ಏಕೆ ಇಸ್ತೊಂದು ಅಕ್ಕರೆ, ಸ್ನೇಹ, ವಿಶ್ವಾಸ ನಿನಗೆ. ಅದು ನನಗೂ ತಿಳಿಲಿಲ್ಲಾ.ಹಿಂಗ ನಾನು ಬಾಳ್ ಯೋಚನೆ ಮಾಡ್ತಾ ಇದ್ದೆ.



ಕೆಲವು ಸಲ ನನ್ನ ಮನಸನ್ಯಾನ ಮಾತು, ಭಾವನೆನ ನಿನ್ನ ಮುಂದ ಹೇಳಿಕೊಳ್ಳೋಣ ಅಂತಾ ಬಾಳ್ ಸಲಾ ಪ್ರಯತ್ನ ಪಟ್ಯಾ ಆದರೆ ನಿನ್ನ ಮುಂದೆ ನಾನು ನಿಂತರೆ ಸಾಕು ಮಾತೆ ಹೊರಗ ಬರ್ತಿರ್ಲಿಲ್ಲ. ಹಿಂಗಾಗಿ ನನ್ನ ಮನಸ್ಸಿನ ಮಾತು ಭಾವನೆ ಹಂಗ ಮರೆ ಆಗಿ ಹೋದ್ವು. ಅದನ್ನ ನನಗ ಕೊನೆತನಕೂ ಹೇಳದಂಗಾತು. ಈಗೂ ಅದು ಹಾಗೆ ಉಳ್ಕೊಂತು.



ಇವತ್ತು ನಾನು ಈ ಊರಿಗೆ ದೊಡ್ಡ ಡಾಕ್ಟರ್ ಆಗೆನಿ. ಇದಕ್ಕೆ ನೀನೆ ಕಾರಣ. ನಾನ್ ಇಷ್ಟು ಸಾಧನೆ ಮಾಡಾಕ್ ನಿನ್ನ ಸ್ಫೂರ್ತಿ, ಪ್ರೋತ್ಸಾಹ, ನೀನು ನಂಗ ತುಂಬಿದ ಧೈರ್ಯಗಳೇ ಕಾರಣ.



'ನೀನು ಒಂಟಿಯಲ್ಲಾ. ನಿನ್ನ ಜೊತೆಗೆ ನಾನು ಅದೀನಿ. ನೀನು ಧೈರ್ಯವಾಗಿರು' ಅಂಥಾ ನೀನು ನಂಗ ಯಾವಾಗಲೂ ಹೇಳ್ತಿದ್ದಿ. ಆದ್ರ ಇವತ್ತು ಆ ಒಂಟಿತನ ಮತ್ತೆ ನನ್ನನ್ನಾ ಆವರಿಸಿಕೊಂಡಿದೆ ಅಂಥಾ ಅನಿಸ್ತಿದೆ. ಯಾಕೆ ಗೊತ್ತಾ ಇವತ್ತಿಗೆ ನೀನು ನನ್ನ ಕಣ್ಣ ಮುಂದೇನೆ ಇಲ್ಲ!



ನನ್ನನ್ನಾ, ಈ ಲೋಕಾನ ಬಿಟ್ಟು ಹೋಗಿ ಇವತ್ತಿಗೆ ನೀನು ಒಂದ್ ವರ್ಷ ಆತು.



ಆವತ್ತು ಒಂದ್ ದಿನ ಆಕ್ಸಿಡೆಂಟ್ ಆಗಿ ನೀನು ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಾ ಆಸ್ಪತ್ರೆಲಿ ಇದ್ದೆ. ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ ಅಂಥಾ ಅಲ್ಲೇ ನಿನ್ನ ಪ್ರಾನಾನೂ ಬಿಟ್ಟೆ.



ನನಗಿನ್ನೂ ಆ ವಿಚಾರ ತಿಳಿದಿರಲಿಲ್ಲ. ಯಾಕಂದ್ರ ನಾನು ಆವಾಗ ನಿನ್ನ ಹತ್ರ ಇದ್ದಿರಲಿಲ್ಲ. ಹೆಚ್ಚಿನ ಸ್ಟಡಿಗಂತ ನೀನೆ ನನ್ನ ಫಾರಿನ್ ಗೆ ಕಳಿಸಿದ್ದಿ. ಹಿಂಗಾಗಿ ಕೊನೆ ಗಳಿಗೆಯಲ್ಲೂ ನಿನ್ನ ಮುಖಾನೂ ನಾನು ನೋಡಾಕ ಆಗಲಿಲ್ಲಾ. ನಾನು ತುಂಬಾ ನತದ್ರುಷ್ಟಳು. ನಾನು ನಿನ್ನ ಮುಂದ ಎಲ್ಲ ವಿಸ್ಯಾನು ಹೇಳಬೇಕಿತ್ತು. ನಾನು ನಿನ್ನ ತುಂಬಾ ಪ್ರೀತಿ ಮಾಡ್ತೀನಿ...



ಆದ್ರೆ ಏನು ಮಾಡ್ಲಿ, ಇವತ್ತು ನೀನು ನನ್ನ ಜೊತೆ ಇಲ್ದೆ ಒಬ್ಬಳೇ ನೋವು, ಸಂಕಟ, ವೇದನೆ ಅನುಭವಿಸ್ತಾ ಇದೀನಿ. ನೀನು ಇದ್ದಿದ್ರೆ ನಾನು ತುಂಬಾ ಸಂತೋಷ ಪಡ್ತಾ ಇದ್ದೆ ಈಗ ಆ ಸಂತೋಶಾನು ನಿನ್ನ ಜೊತೆಲೆ ಹೊರಟು ಹೊಗಿದೆ. ಈಗ ಮತ್ತೆ ಒಂಟಿತನ ಮತ್ತೆ ನನ್ನ ಕಾಡ್ತಾ ಇದೆ.



ಮುಂದಿನ ಒಂದ್ ಜನ್ಮಾ ಇದ್ರೆ ಅದು ನಿನ್ನ ಜೋತೇನೆ ಬಾಳ್ತಿನಿ....

Saturday, March 22, 2008

ಅವನು ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ


ತನ್ನ ಸ್ವಂತ ಊರಿಂದ ಕಾಲೇಜಿಗೆ ಸುಮಾರು ಮೈಲಿ ನಡೆಯಬೇಕಾಗಿದ್ದರಿಂದ, ಅಜಿತ್ ತನ್ನ ದೊಡ್ಡಮ್ಮನ ಊರಿಗೆ ತೆರಳಿದ. ಅವನು ತನ್ನ ತಂದೆ-ತಾಯಿಗೆ ನಾಲ್ಕನೆ ಮಗ. ಅವರಿಗೆ ಹೆಣ್ಣು ಮಕ್ಕಳಿರಲಿಲ್ಲ. ಎಲ್ಲರೂ ಗಂಡು ಮಕ್ಕಳೇ. ಸಾಮಾನ್ಯವಾಗಿ ಕೊನೆಯ ಮಗ ಅಂದ್ರೆ, ಎಲ್ಲರಿಗಿಂತಲೂ ಅವರ ಮೇಲೆ ಪ್ರೀತಿ ಹೆಚ್ಚಾಗಿರುತ್ತೆ. ಅದು ಸ್ವಾಭಾವಿಕ ಕೂಡ. ಅಂಥ ಪ್ರೀತಿನ ಕೆಲವರು ದುರುಪಯೋಗ ಮಾಡಿಕೊಳ್ಳುವವರು ಇದಾರೆ. ಆದರೆ ಅಜಿತ ಇದಕ್ಕೆ ಅಪವಾದವಾಗಿದ್ದ.

ಮನೆಯಲ್ಲಿ ತಂದೆ ತಾಯಿ ಎಂದರೆ ಅವನಿಗೆ ಅಚ್ಚು ಮೆಚ್ಚು. ಅವರಿಗೂ ಕೂಡ ಇವನೆಂದರೆ ಎಲ್ಲಿಲ್ಲದ ಪ್ರೀತಿ, ಅಷ್ಟೇ ವಾತ್ಸಲ್ಯ ಕೂಡ. ಮನೆಯಲ್ಲಿ ಅಷ್ಟೇ ಅಲ್ಲಾ, ಶಾಲೆಯಲ್ಲಿಯೂ ಇವನು ನಂ.೧. ಮಾಸ್ತರು ಇವನ ವಿನಯತೆ ಹಾಗೂ ಮುಗ್ಧತೆಯನ್ನು ಕಂಡು ಮೆಚ್ಚಿಕೊಂಡಿದ್ದರು. ಮಾತಿನಲ್ಲೂ ಅಜಿತ್ ಎಂಥವರನ್ನೂ ಗೆಲ್ಲುವವನಾಗಿದ್ದ. ತನ್ನ ಸ್ವಂತ ಊರಿನಲ್ಲಿ ಇವನ ಮಾತಿಗೆ, ನಡತೆಗೆ ಮರುಳಾಗದವರು ಇರಲೇ ಇಲ್ಲ ಎನ್ನಿ.

ಗುಂಗುರ ಕೂದಲು, ಧ್ರುಡವಾದ ಮೈಕಟ್ಟು, ಈಗಿನಂತೆ ಜೀನ್ಸ್ ಫ್ಯಾಂಟ್ ಧರಿಸಿ ಹೆಚ್ಚು ಸ್ಟೈಲ್ ಮಾಡದೆ, ತುಂಬಾ ಸರಳವಾದ ಉಡಿಗೆ ತೊಡುತ್ತಿದ್ದ. ಒಂದರ್ಥದಲ್ಲಿ ಸಾಂಪ್ರದಾಯಿಕ ಮನುಷ್ಯ. ಅದು ಕೇವಲ ಉಡಿಗೆ ತೊಡುಗೆಗಳಲ್ಲಿ ಮಾತ್ರ ಇದ್ದಿರಲಿಲ್ಲ. ಅವನು ಮಾತಿನಲ್ಲಿ, ನಡುವಳಿಕೆಯಲ್ಲೂ ರೂಡಿಗತವಾಗಿ ಬಂದಿತ್ತು.

ತಾನು ಹೆಚ್ಚು ಕಲಿಯಬೇಕು, ಜೀವನದಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲ ಅವನಲ್ಲಿ ಬೆರೂರಿತ್ತು. ವಿಚಿತ್ರ ಅಂದ್ರೆ ಅವನ ತಂದೆಯೇನೂ ಕಡಿಮೆ ಇರಲಿಲ್ಲ. ನೂರಾರು ಎಕರೆ ಹೊಲ ಇತ್ತು. ಪ್ರತಿ ವರ್ಷ ಅದರಿಂದ ಲಕ್ಷಾಂತರ ರು. ಫಸಲು ಬೆಳಿತಾ ಇದ್ರು. ಆದರು ಅವನ ತಂದೆ ಮಾಡಿದ ಆಸ್ತಿ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ, ಓದಬೇಕು ಎಂಬ ದೊಡ್ಡ ಹಂಬಲ ಹಾಗೂ ಚಲವನ್ನಿತ್ತುಕೊಂಡು ತನ್ನ ದೊಡ್ಡಮ್ಮನ ಊರಿನತ್ತ ಚಿತ್ತ ಹರಿಸಿದ.

ಅಜಿತ್ ಅವರ ದೊಡ್ಡಮ್ಮನ ಊರಿಗೆ ಬಂದು ಇನ್ನೂ ಒಂದು ತಿಂಗಳಾಗಿರಲಿಲ್ಲ. ಆ ಮನೆಯ ಸದಸ್ಯರೆಲ್ಲರ ಮನಸ್ಸನ್ನು ತನ್ನ ಮುತ್ತಿನಂಥ ಮಾತುಗಳಿಂದ ಹಾಗೂ ಕೆಲಸದಿಂದ ಮಂತ್ರ ಮುಗ್ಧರನ್ನಾಗಿ ಮಾಡಿದ್ದ. ನಾನು ಕಾಲೇಜಿಗೆ ಹೋಗುತ್ತಿದ್ದೇನೆ ಎನ್ನುವ ಒಂದು ಚೂರು ಅಹಂಕಾರವಿಲ್ಲದೆ, ಅವರ ದೊಡ್ಡಮ್ಮನ ಮನೆಯ ದನದ ಕೊಟ್ಟಿಗೆಯಲ್ಲಿ ಶೆಗಣಿಯನ್ನೂ ಬಳಿತ್ತಿದ್ದ. ನಿಜಕ್ಕೂ ಇವನನ್ನು ಹಡೆದವರು ಪುಣ್ಯವಂತರು ಎಂದು ಜನಾ ಕೂಡ ಆಡಿಕೊಳುತ್ತಿದ್ರು.

ಅಜಿತನಿಗೆ ವಾಣಿಜ್ಯದಲ್ಲಿ ತುಂಬಾ ಆಸಕ್ತಿ ಇದ್ದಿದ್ದರಿಂದ ಬಿ.ಕಾಂ ಗೆ ಅಡ್ಮಿಶನ್ ಮಾಡಿಸಿದ್ದ. ಮೊದಲ ವರ್ಷ ಚೆನ್ನಾಗಿ ಸ್ಕೋರ್ ಮಾಡಿ, ಫರ್ಸ್ಟ್ ಕ್ಲಾಸಿನಲ್ಲಿ ಪಾಸಾದ. ಹಾಗೂ ಹೀಗೂ ಮಾಡಿ ಮೊದಲ ವರ್ಷ ಮುಗಿಸಿದ. ಅಷ್ಟೊತ್ತಿಗಾಗಲೇ ಅವನಿಗೆ ಕಾಲೇಜಿನಲ್ಲೂ ಸಾಕಷ್ಟು ಮಂದಿ ಸ್ನೇಹಿತರಾಗಿ ಬಿಟ್ಟಿದ್ದರು.

ಅವರು ಎಷ್ಟೊಂದು ಅವನನ್ನು ಹಚ್ಚಿಕೊಂಡಿದ್ದರು ಅಂದ್ರೆ ಕೆಲವೊಂದು ಸಲ ಅಜಿತ ಕಾಲೇಜಿಗೆ ಹೋಗದಿದ್ದರೆ ಅವನ ಸ್ನೇಹಿತರು ಮನೆಗೆ ಬಂದು ವಿಚಾರಿಸುತ್ತಿದ್ದರು. ಆ ಮಟ್ಟಿಗೆ ಅವನ ಸ್ನೇಹಕ್ಕೆ ಅಂಟಿಕೊಂಡಿದ್ದರು.

ಆಗ ತಾನೆ ಅಜಿತ್ ತನ್ನ ಎರಡನೆ ವರ್ಷದ ಬಿ.ಕಾಂ ಪರೀಕ್ಷೆ ಮುಗಿಸಿದ್ದ. ತನ್ನೂರಿಗೆ ಹೋಗಿ ಬಂದ ಮೇಲೆ ಫೈನಲ್ ಡಿಗ್ರಿಗೆ ಕೋಚ್ ತೆಗೆದುಕೊಂಡರಾಯಿತು ಅಂಥ ಪ್ಲಾನ್ ಮಾಡಿಕೊಂಡಿದ್ದ. ಆದರೆ ಅವನ ಸ್ನೇಹಿತರು ಅವನನ್ನು ಊರಿಗೆ ಕಳುಹಿಸಲು ಇಷ್ಟವಿರಲಿಲ್ಲ. ಹೀಗಾಗಿ ಅಜಿತ ತನ್ನ ಅಕ್ಕನ (ತನ್ನ ದೊಡ್ಡಮ್ಮನ ಮಗಳು) ಊರಿಗೆ ಹೋಗೋಣ ಅಂದುಕೊಂಡು, ತನ್ನ ಸ್ನೇಹಿತರೊಂದಿಗೆ ಅಲ್ಲಿಗೆ ಹೋದ. ಅಂದು ತನ್ನ ಅಕ್ಕನ ಮನೆಗೆ ಹೋದ ಅಜಿತ ಅಂದು ಎಲ್ಲರೊಂದಿಗೆ ಸಂತಸದಿಂದ ಕಾಲ ಕಳೆದ. ಅವನ ಸ್ನೇಹಿತರೂ ಅವನಿಗೆ ಒಳ್ಳೆ ಕಂಪನಿ ಕೊಟ್ರು.

ಮಾರುದಿನ ಬೆಳಗ್ಗೆ ಸರಿಸುಮಾರು ಹತ್ತು ಗಂಟೆಯಾಗಿತ್ತು. ಅವನ ದೊಡ್ಡಮ್ಮನ ಮನೆಯ ಫೋನ್ ರಿಂಗ್ ಆಯಿತು. ಫೋನ್ ರಿಸಿವ್ ಮಾಡಿದ ಅವರಣ್ಣ (ದೊಡ್ಡಮ್ಮನ ಮಗ) ಏನೂ ತೋಚದಂತೆ ದಿಗ್ಭ್ರಾಂತನಾಗಿ ಹಾಗೆ ನಿಂತು ಬಿಟ್ಟ. ಮನೆಯವರಿಗೆಲ್ಲ ತುಂಬಾ ಗಾಬರಿಯಿಂದ "ಏನಾಯಿತು" ಅಂಥ ಕೇಳಿದಾಗ ಅವರಣ್ಣ ಹೇಳಿದ್ದೇನು ಗೊತ್ತೆ ' ಅಜಿತ ಈಜಲು ಹೋಗಿ ಹೊಳ್ಯಾಗ ಬಿದ್ದು ಸತ್ತು ಹೊಗ್ಯಾನಂಥ. ಅವನ ಹೆಣ ಇನ್ನೂ ಹುಡುಕ್ತಾ ಇದಾರಂತೆ' ಅಂದಾಗ. ಮನೆಯಲ್ಲಿ ಶ್ಮಶಾನ ಮೌನ ಆವರಿಸಿತ್ತು.
ಇದಕ್ಕೆ ಅನ್ನೋದು ವಿಧಿ ಆಟ ಅಂಥ. ದೇವರು ತನ್ನ ಕಡೆ ಯಾವಾಗಲು ಒಳ್ಳೆಯವರನ್ನೇ ಕರೆದುಕೊಳ್ಳುತ್ತಾನೆ ಅಂತ ಊರಿನ ಜನಾ ಎಲ್ಲ ಕಣ್ಣಿರು ಹಾಕ ತೊಡಗಿದರು.

ಆ ಸಾವು ಕೂಡ ಅವನನ್ನು ತನ್ನತ್ತ ಕರೆದುಕೊಳ್ಳುವಾಗಲೂ, ಅಜಿತನಿಗೆ ಈಜು ಬಾರದಂತೆ ಮಾಡಿ ನದಿಯನ್ನು ಸಾವಿನ ಕುಣಿಕೆಯನ್ನಾಗಿಸಿ, ತಿರುಗುಣಿ ಎಂಬ ಪಾಶಕ್ಕೆ ಸಿಕ್ಕಿ ಹಾಕಿಸಿ ಅವನ ಪ್ರಾಣ ಹಿಂಡಿಕೊಂಡಿತು.

ಬಿಟ್ಟು ಹೋಗ್ತಾನೆ ಅಂದಾಗಲೇ ತಾಯಿ ಹೃದಯ ವಿಲಿವಿಲಿ ಅಂತಿತ್ತು. ಇನ್ನು ಮಗ ನಮ್ಮನ್ನೆಲ್ಲಾ ಬಿಟ್ಟು ಶಾಶ್ವತವಾಗಿ ಕಣ್ ಮುಚ್ಚಿಕೊಂಡಿದ್ದಾನೆ ಎಂಬ ವಿಷಯ ತಿಳಿದ ತಾಯಿ ಅದೆಷ್ಟು ನೋವು, ವೇದನೆ, ಸಂಕಟ ಪಟ್ಟಿರಬೇಡ ನೀವೇ ಊಹಿಸಿ.
ಎರಡು ದಿನಗಳಾದ ನಂತರ ಅಜಿತನ ಹೆಣ ಸಿಕ್ಕಿತು. ಅವನ ತಂದೆ ತಾಯಿ, ಬಂಧು ಬಳಗ, ಸ್ನೇಹಿತರೆಲ್ಲ ಅವನ ಅಗಲುವಿಕೆಯಿಂದ ಸಾಕಷ್ಟು ನೊಂದರು. ಇಂತ ವ್ಯಕ್ತಿಯೊಬ್ಬ ನೂರುಕಾಲ ಬಾಳಬೇಕಿತ್ತು ಎಂಬುದು ಅವನ ಬಗ್ಗೆ ತಿಳಿದುಕೊಂಡ ಜನರೆಲ್ಲ ಮಾತನಾದಿಕೊಲ್ಲುತ್ತಲೇ ಇದ್ದರು.


ನಿಜ ಅಜಿತ ಸಾವಿನಲ್ಲೂ 'ಅಜಿತ' ನಾಗಬೇಕಿತ್ತು. ಆದರೆ ವಿಧಿ ಬರಹದ ಮುಂದೆ ಯಾರು ದೊಡ್ಡವರಲ್ಲ....


ಇನ್ನೊಂದು ವಿಷಯ ಗೊತ್ತಾ ಈ ಅಜಿತ ಬೇರೆ ಯಾರು ಅಲ್ಲ ನನ್ನ ಸ್ವಂತ ಚಿಕ್ಕಪ್ಪ........................


ಅವನು ತೀರಿಹೋದಾಗ ನನಗೆ ೧೦ ವರ್ಷ. ಇಂದಿಗೆ ಅವನು ಸತ್ತು ಸುಮಾರು ೧೫ ವರ್ಷಗಳೇ ಗತಿಸಿದವು. ಯಾಕೋ ಅವನದು ನೆನಪಾಯ್ತು ಅದಕ್ಕೆ ಇದನ್ನು ಮನಸ್ಸು ಬಿಚ್ಚಿ ಬರೆದೆ.

Wednesday, March 19, 2008

ಮರೆಯಾದರೂ 'ಮರೆಯದವರು'


'ಅಗಲುವಿಕೆ' ಎಂಥ ಮನುಷ್ಯನನ್ನು ಭಾವುಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಅದು ನನ್ನ ಅನುಭವಕ್ಕೂ ಹೊರತಾಗಿಲ್ಲ. ಏನೂ ಅರಿಯದ ವಯಸ್ಸಿನಲ್ಲಿ ಸಂತಸದಿಂದ ಕೂಡಿ ಆಡಿದ ಗೆಲೆಯ್ ಒಮ್ಮೆಲೇ ಬಿಟ್ಟುಹೊದಾಗ...

ಮನಸ್ಸಿಗೆ ಏನೋ ಒಂದ ಥರಾ ಹೇಳಿಕೊಳ್ಳದ ವೇದನೆ.

ಅಂಥ ಸ್ನೇಹಿತರನ್ನು ಎಸೆಸೆಲ್ಸಿ ಆದ ಮೇಲೆ ಅನಿವಾರ್ಯವಾಗಿ ಬಿಡಬೇಕಾಯಿತು. ಚಿಕ್ಕವನಿರುವಾಗ ಅವರೊಂದಿಗೆ ಆಡಿದ ಮನ್ನಾಟ, ಚಿನ್ನಿ ದಾಂಡು, ಕಣ್ಣ ಮುಚ್ಚಾಲೆ ಆಟಗಳು ಇನ್ನೂ ಕೂಡ ಕಣ್ಣು ಮುಂದೆ ಕಟ್ಟಿದಂತಿದೆ. ಇದು ನನ್ನ ಸ್ನೇಹಿತರ ಅಗಲುವಿಕೆ ಆಯ್ತು. ಬಿಳ್ಕೊಡುಗೆ ಸಮಾರಂಭದಲ್ಲಿ ಅವರೊಟ್ಟಿಗೆ ಅತ್ತ ನೆನಪು ಕೂಡ ಈಗಲೂ ನನ್ನನ್ನು ಯಾವುದೊ ಲೋಕಕ್ಕೆ ಕೊಂಡೊಯ್ಯುತ್ತದೆ.

ಇಂದಿಗೆ ಸರಿಯಾಗಿ ಹತ್ತು ವರ್ಷಗಳೇ ಕಳೆದವು. ಆ ಬಾಲ್ಯದ ಜೀವನವನ್ನು ಸಾಗಿ ಬಂದು. ಈಗ ಉಳಿದಿರುವುದು ಅದರ ನೆನಪು ಮಾತ್ರ. ಆದರೆ ಆ ನನ್ನ ಸ್ನೇಹಿತರು ಬೇರೆ ಬೇರೆ ಕಡೆ ಇದ್ದರೆ. ಅದ್ರಲ್ಲಿ ಕೆಲವರು ಮಾತ್ರ ಇದುವರೆಗೆ ಕಾಂಟಾಕ್ಟ್ ನಲ್ಲಿ ಇದಾರೆ. ಉಳಿದವರು ಮರೆಯಾದರು, ನನ್ನಿಂದ ಮರೆಯಲಾರದಷ್ಟು ನೆನಪುಗಳನ್ನು ಮನಸಿನ ಮರೆಯಲ್ಲಿ ಬಿತ್ತಿ ಹೋಗಿದ್ದಾರೆ. ಅವರು ಎಲ್ಲಿದ್ದರೂ ಚೆನ್ನಾಗಿರಲಿ.
ಇನ್ನೊಮ್ಮೆ ನನ್ನ ಬಾಲ್ಯದ ಸ್ನೇಹಿತರನ್ನ ಒಟ್ಟಿಗೆ ಸೇರಿಸಿ ಭೇಟಿ ಆಗೋಣ ಅಂಥ ನಾನು ನನಗೆ ಸಿಕ್ಕ ಸ್ನೇಹಿತರಿಗೆಲ್ಲ ಹೇಳ್ತಾನೆ ಇದೇನೇ. ಆದರೆ ಆ ಕಾಲ ಯಾವಾಗ ಕೂಡಿ ಬರುತ್ತೋ?

ನನ್ನ ಬಾಲ್ಯದ ಮಿತ್ರರು ಅಷ್ಟೆ ಅಲ್ಲದೆ, ಪಿಯುಸಿ ಹಾಗೂ ಡಿಗ್ರೀ ಕಾಲೇಜ್ ಮಿತ್ರರನ್ನು ಭೇಟಿ ಮಾಡುವ ಇಂಗೆತವಿದೆ. ಆದರೆ ಅವರನ್ನು ಯಾವಾಗ ಭೇಟಿ ಮಾಡ್ತೀನಿ ಎಂಬ ಕಾತುರ ಪ್ರತಿದಿನ ಹೆಚ್ಚಾಗುತ್ತಿದೆ.ನನ್ನ ಕಾಲೇಜ್ ದಿನಗಳು ಕೂಡ ಎಂದಿಗೂ ಮರೆಯದ ದಿನಗಳಾಗಿವೆ. ವಿಚಿತ್ರ ಅಂದ್ರೆ, ಬಾಲ್ಯದ ಜೀವನವನ್ನೆಲ್ಲಾ ಅದು ನನಗೆ ಮತ್ತೆ ಮರಳಿ ಕೊಟ್ಟಿತು ಎಂಬ ಸಂತೋಷದಲ್ಲಿದ್ದೆ. ಆದರೆ, ಅಲ್ಲಿಯೂ ಕೂಡ ಅಗಲುವಿಕೆ ಮತ್ತೆ ನಮ್ಮೆಲ್ಲರನ್ನು ಬೇರ್ಪಡಿಸಿತು.

ಆ ಮಿತ್ರರು ನನ್ನಿಂದ ಬೇರೆ ಕಡೆ ಇದ್ದು ಮರೆಯಾದ್ರೂ, ನಾನು ಅವರನ್ನು ಮರೆತಿಲ್ಲ. ನಿಜ ಹೇಳಬೇಕೆಂದರೆ ನನ್ನ ಬಾಲ್ಯದ ಜೀವನದಿಂದ ಇಲ್ಲಿಯವರೆಗೆ ಒಂದಿಲ್ಲ ಒಂದು ನೆನಪು ಕೊಟ್ಟ ಸ್ನೇಹಿತರೆಲ್ಲರೂ ನನ್ನಿಂದ ಕಣ್ಣಿನಿಂದ ಮರೆಯಾದ್ರೂ, ನನ್ನ ಮನಸಿನಿಂದ ಎಂದೂ "ಮರೆಯದವರು".