Sunday, October 21, 2007

ನಾವ್ ನೀವ್ ಬಂಗಾರ್‌ದ್ಹಂಗ್ ಇರೂಣ....


ಬಹುಶಃ ನಾನು ಊರಲ್ಲಿ ಇದ್ದಿದ್ರೆ ವಿಜಯ ದಶಮಿಯನ್ನು ಅಲ್ಲಿಯೇ ಆಚರಣೆ ಮಾಡ್ತಾ ಇದ್ದೆ. ಆದ್ರೆ ಅದಕ್ಕೆ ಕಾಲ ಕೂಡಿ ಬಾರದ್ದರಿಂದ ಚೆನ್ನೈನಲ್ಲಿ ನನ್ನ ಯಾಂತ್ರಿಕ ಜೀವನದಲ್ಲಿಯೇ ಅಲ್ಲಿಯ ಹಬ್ಬದ ಆಚರಣೆ ಬಗೆಯನ್ನು ಜ್ಞಾಪಿಸಿಕೊಂಡು ಈ ಮೂಲಕ ನನ್ನ ಎಲ್ಲ ಮಿತ್ರರಿಗೆ, ಬಂಧು-ಬಾಂಧವರಿಗೆ ಹಾಗೂ ಈ ಬ್ಲಾಗ್ ಓದಿದವರಿಗೂ ಸಹ ವಿಜಯ ದಶಮಿಯ ಶುಭಾಶಯಗಳನ್ನು ಕೋರುತ್ತಿದ್ದೇನೆ.


ಉತ್ತರ ಕರ್ನಾಟಕದಲ್ಲಿ ವಿಜಯ ದಶಮಿ ದಿನದಂದು ಪತ್ರಿ ಹಾಗೂ ಪತ್ರಿಯ ಎಲೆಯನ್ನು ಹಿರಿಯ ಕೊಟ್ಟು ಅವರಿಗೆ ನಮಸ್ಕರಿಸಿ, "ನಾವು ನೀವು ಬಂಗಾರ್‌ದ್ಹಂಗ್ ಇರೂಣ" ಅಂತ ಹೇಳೋದು ಸಾಂಪ್ರದಾಯ. ಅದಕ್ಕೆ ನಾನು ಅಲ್ಲಿಲ್ಲದ್ದರಿಂದ, ಈ ಮೂಲಕ ಎಲ್ಲರಿಗೂ ಇದನ್ನೇ ಹೇಳಲು ಇಚ್ಛಿಸಲು ಬಯಸುವೆ.


'ನಿನ್ನೆಯ ಕಹಿಯನ್ನು ಮರೆಯೋಣ,

ನಾಳೆಯ ಏನಾಗುತ್ತೊ ಎಂಬುವುದನ್ನು ಬಿಡೋಣ

ಇಂದಿನ ಸಂತಸವನ್ನು ಹಂಚಿಕೊಳ್ಳೋಣ'


-ಎಂದು ಹೇಳುತ್ತಾ, ಈ ಬ್ಲಾಗ್ ಓದುಗರಿಗೆ, ಮಿತ್ರರಿಗೆ, ಬಂಧು-ಬಾಂಧವರಿಗೆ ಮತ್ತೊಮ್ಮೆ ವಿಜಯ ದಶಮಿಗಳ ಶುಭಾಶಯ ಕೋರುವೆ.

No comments: